Nojoto: Largest Storytelling Platform

ಭಾವಾನುಯಾಯಿ ಕತ್ತಲೆಯಲ್ಲಿ ಕಂಡ ಕನಸು ಕತ್ತು ಹಿಸುಕಿತ್ತು

ಭಾವಾನುಯಾಯಿ

ಕತ್ತಲೆಯಲ್ಲಿ ಕಂಡ ಕನಸು
ಕತ್ತು ಹಿಸುಕಿತ್ತು ಕಣ್ತೆರೆಯುವಾಗ

ಹೀಗೊಂದು ಮೌನ ಏತಕೆ
ಬರಗಾಲದಲ್ಲಿ ಬಿರುಕು ಬಿಡುವ 
ಕೆರೆಯ ಒಡಲಂತೆ
ಮನದ ಹೂಳೆತ್ತುವರಾರಿಲ್ಲಿ

ಕಪ್ಪು ಬಿಳುಪು ಬದುಕಿನೆರೆಡು ನಾಣ್ಯ
ಬವಣೆಯನ್ನು ಕಿತ್ತು ಬಡಿದಾಡಿದೆ ಜೀವ 
ಮೂಕ ವೇದನೆಯಲಿ ನೊಂದ ಜೀವವಾಗಿ
ಬತ್ತಿ ಹೋದ ಬದುಕಿನಲಿ ಬರುವವರು ಯಾರು.

ಹುಳಿ ಹಿಂಡಿ ಜೀವನವ ಹೆಪ್ಪು ಮಾಡುವವರೇ ಹೆಚ್ಚು
ಬಿಕ್ಕಳಿಸಿದರೆ ಅಕ್ಕಪಕ್ಕದವರು ನಗುವರು
ನೆತ್ತಿಯ ಮೇಲಿನ ಸೂರು ಸೋರುತ್ತಿದ್ದರು
ಬಿಸಿಯುಸಿರು ಹೇಳುತಿದೆ ನೀ ಮೌನಿಯಾಗು.

ನೆಚ್ಚಿದವರು ಇಲ್ಲಿಯವರೆಗೆ ಬಂದಾರು
ಬದುಕಿನ ಬಿಸಿಲಿಗೆ ತತ್ತರಿಸಿ ಭಯದಿ
ಬತ್ತಿಹೋದರೂ ಮತ್ತಾವ ದಾರಿಯಿದೆ
ಇದೆ ಒಂದೇ ದಾರಿ ಇಹ ಲೋಕದ ದಾರಿ.

ಅನಪು
ಅರವಿಂದ್ ಎನ್ ಪಿ ಭಾವನೆಗಳ ಅನುಯಾಯಿ.
#inspirationalquotes #lovequotes #lifequotes #kannada #kavanagalu #kavitegalu #feelings
ಭಾವಾನುಯಾಯಿ

ಕತ್ತಲೆಯಲ್ಲಿ ಕಂಡ ಕನಸು
ಕತ್ತು ಹಿಸುಕಿತ್ತು ಕಣ್ತೆರೆಯುವಾಗ

ಹೀಗೊಂದು ಮೌನ ಏತಕೆ
ಬರಗಾಲದಲ್ಲಿ ಬಿರುಕು ಬಿಡುವ 
ಕೆರೆಯ ಒಡಲಂತೆ
ಮನದ ಹೂಳೆತ್ತುವರಾರಿಲ್ಲಿ

ಕಪ್ಪು ಬಿಳುಪು ಬದುಕಿನೆರೆಡು ನಾಣ್ಯ
ಬವಣೆಯನ್ನು ಕಿತ್ತು ಬಡಿದಾಡಿದೆ ಜೀವ 
ಮೂಕ ವೇದನೆಯಲಿ ನೊಂದ ಜೀವವಾಗಿ
ಬತ್ತಿ ಹೋದ ಬದುಕಿನಲಿ ಬರುವವರು ಯಾರು.

ಹುಳಿ ಹಿಂಡಿ ಜೀವನವ ಹೆಪ್ಪು ಮಾಡುವವರೇ ಹೆಚ್ಚು
ಬಿಕ್ಕಳಿಸಿದರೆ ಅಕ್ಕಪಕ್ಕದವರು ನಗುವರು
ನೆತ್ತಿಯ ಮೇಲಿನ ಸೂರು ಸೋರುತ್ತಿದ್ದರು
ಬಿಸಿಯುಸಿರು ಹೇಳುತಿದೆ ನೀ ಮೌನಿಯಾಗು.

ನೆಚ್ಚಿದವರು ಇಲ್ಲಿಯವರೆಗೆ ಬಂದಾರು
ಬದುಕಿನ ಬಿಸಿಲಿಗೆ ತತ್ತರಿಸಿ ಭಯದಿ
ಬತ್ತಿಹೋದರೂ ಮತ್ತಾವ ದಾರಿಯಿದೆ
ಇದೆ ಒಂದೇ ದಾರಿ ಇಹ ಲೋಕದ ದಾರಿ.

ಅನಪು
ಅರವಿಂದ್ ಎನ್ ಪಿ ಭಾವನೆಗಳ ಅನುಯಾಯಿ.
#inspirationalquotes #lovequotes #lifequotes #kannada #kavanagalu #kavitegalu #feelings
draravindnp1675

Dr Anapu

New Creator