ಭಾವಾನುಯಾಯಿ ಕತ್ತಲೆಯಲ್ಲಿ ಕಂಡ ಕನಸು ಕತ್ತು ಹಿಸುಕಿತ್ತು ಕಣ್ತೆರೆಯುವಾಗ ಹೀಗೊಂದು ಮೌನ ಏತಕೆ ಬರಗಾಲದಲ್ಲಿ ಬಿರುಕು ಬಿಡುವ ಕೆರೆಯ ಒಡಲಂತೆ ಮನದ ಹೂಳೆತ್ತುವರಾರಿಲ್ಲಿ ಕಪ್ಪು ಬಿಳುಪು ಬದುಕಿನೆರೆಡು ನಾಣ್ಯ ಬವಣೆಯನ್ನು ಕಿತ್ತು ಬಡಿದಾಡಿದೆ ಜೀವ ಮೂಕ ವೇದನೆಯಲಿ ನೊಂದ ಜೀವವಾಗಿ ಬತ್ತಿ ಹೋದ ಬದುಕಿನಲಿ ಬರುವವರು ಯಾರು. ಹುಳಿ ಹಿಂಡಿ ಜೀವನವ ಹೆಪ್ಪು ಮಾಡುವವರೇ ಹೆಚ್ಚು ಬಿಕ್ಕಳಿಸಿದರೆ ಅಕ್ಕಪಕ್ಕದವರು ನಗುವರು ನೆತ್ತಿಯ ಮೇಲಿನ ಸೂರು ಸೋರುತ್ತಿದ್ದರು ಬಿಸಿಯುಸಿರು ಹೇಳುತಿದೆ ನೀ ಮೌನಿಯಾಗು. ನೆಚ್ಚಿದವರು ಇಲ್ಲಿಯವರೆಗೆ ಬಂದಾರು ಬದುಕಿನ ಬಿಸಿಲಿಗೆ ತತ್ತರಿಸಿ ಭಯದಿ ಬತ್ತಿಹೋದರೂ ಮತ್ತಾವ ದಾರಿಯಿದೆ ಇದೆ ಒಂದೇ ದಾರಿ ಇಹ ಲೋಕದ ದಾರಿ. ಅನಪು ಅರವಿಂದ್ ಎನ್ ಪಿ ಭಾವನೆಗಳ ಅನುಯಾಯಿ. #inspirationalquotes #lovequotes #lifequotes #kannada #kavanagalu #kavitegalu #feelings