ಜೈ ಜವಾನ್ ಜೈ ಕಿಸಾನ್ ಶಾಂತಿ ದೂತನ ನೆರಳಲ್ಲೇ ಹೆಜ್ಜೆ ಇರಿಸಿದ ವಾಮನಮೂರ್ತಿ ನೀವು.. ಸರಳ ಶಿಷ್ಟ ಆಚರಣೆಯೇ ಜೀವನವೆಂದು ಅನುಭವಿಸಿ ತಿಳಿಸಿದ್ದೀರಿ ನೀವು... ದೇಶದ ನಿರ್ಮಾತೃಗಳು ಗಡಿ ಕಾಯುವ ಯೋಧ ಅನ್ನ ನೀಡುವ ರೈತನೆಂದು ಘೋಷಿಸಿದ್ದೀರಿ ನೀವು...... ದೇಶದ ಅಸ್ತಿತ್ವದ ಪ್ರಶ್ನೆ ಬಂದಾಗ.. ಶಾಂತಿಗೂ ಬದ್ಧ ಸಮರಕ್ಕೂ ನಾನು ಸಿದ್ಧವೆಂದು ವಿಶ್ವಕ್ಕೆ ಸಂದೇಶ ರವಾನಿಸಿದ ಜನನಾಯಕರು ನೀವು.. Lal Bahadur Shastri