ವಾಣಿವಿಲಾಸ ಸಾಗರ ಬಿಸಿಲ ಬೇಗೆಯ.. ಬರದ ಛಾಯೆಯ.. ಬಯಲು ಸೀಮೆಯ ಮೇಲೆ ರಾಜಮಾತೆಗೆ ಅದೆಂತಹ ಪ್ರೀತಿಯ ಮಮಕಾರ.... ನಾಲ್ವಡಿ ರಾಜರ.. ಶೇಷಾದ್ರಿ ದಿವಾನರ.. ಅಣತಿಯಂತೆ ನಿರ್ಮಾಣವಾಯಿತು ತಾಯಿ ವೇದಾವತಿಗೊಂದು ಕಟ್ಟೆ... ನಮ್ಮ ವಾಣಿವಿಲಾಸ ಅಣೆಕಟ್ಟೆ.. ಅವಿರತ ಹೋರಾಟದ ಫಲವಾಗಿ ಮೈದುಂಬಿ ಹರಿಯುತಿಹಳು ಭಧ್ರೆಯೂ ವೇದಾವತಿಯ ಜೊತೆ ಜೊತೆಯಾಗಿ ಬರದ ನಾಡಿನ ಭಾಗೀರಥಿಯಾಗಿ... ಬರಡಾಗಿದ್ದ ನೆಲ ಮತ್ತೆ ಹಸಿರಾಗಿ.. ವಾಣಿವಿಲಾಸಿಯ ತುಂಬಿದ ಕೋಡಿ ರೈತರ ಮೊಗದ ಮಂದಹಾಸ ನೋಡಿ... ಸ್ಮರಿಸಬೇಕಿದೆ ಬರವ ನೀಗಿಸಿದ ಭಗೀರಥರಿಗೆ ತಲೆಬಾಗಿ... Vani vilasam