ಅಂತರಾತ್ಮದ ಅಧಿಪತಿ ಪರಮಾತ್ಮನೇ ಹೊರತು ನಾವಲ್ಲ
ಅವನಿಚ್ಚೆ ಇಲ್ಲದೆ ಬದಲಾವಣೆ ಸಾದ್ಯವೇ...?
ಸಾದ್ಯವಿಲ್ಲ..👆
#ಸತ್ಯಸತೀಶ್
Sathya Sathish J G
ಭಾವನೆಗಳಿಲ್ಲದ ಮನದ ಮಾತುಗಳಿವು
ಇದೆಂದು ಶುಭಾಶಯ ಆಗುವುದಿಲ್ಲ
ಇದರಲ್ಲಿ ನನ್ನ ತಪ್ಪೇನು ಇಲ್ಲ ನನ್ನೊಲವೇ...👩⚕️
ಆದರೂ ಶುಭಾಶಯ ಹೇಳದಿರುವುದು ನನ್ನದೇ ತಪ್ಪು ಎಂದಾದರೆ
ನನ್ನೆಯಾ ನೆನಪು ನಿಮಗಿದ್ದರೆ ಮನ್ನಿಸಿಬಡಿ ನನ್ನ...🙏😔🙏
ಸೂರ್ಯ ಬೆಳಗುವುದನ್ನೆ ಮರೆತರೂ
Sathya Sathish J G
ಇಷ್ಟೆಲ್ಲಾ ನಾ ಹೇಳುತ್ತಿರುವುದಕ್ಕೆ ಕಾರಣಗಳಿವೆ
YQ ಬಳಗದ ಯಾರಿಗೂ ನಾ ಹೇಳುತ್ತಿಲ್ಲ..👆
ಬರಹದ ಭಾವವನ್ನು ಅರಿಯದ ನನ್ನೊಲವಿಗೆ ಹೇಳುತ್ತಿರುವೇ..ಅಷ್ಟೇ..
ಅವರಿಗೆ ತಿಳಿಸಲು ನನ್ನಲ್ಲಿ ಬೇರೆ ಯಾವ ಮಾರ್ಗವು ಉಳಿದಿಲ್ಲ
ಇರುವುದೊಂದೇ ಈ ಬರಹ...👆
ಇನ್ನ ಬರಹವೆಂದರೆ ಓದುವವರ ಭಾವಕ್ಕೆ ತಕ್ಕಂತೆ ಬರಹದ ಭಾವವು ಬದಲಾಗುತ್ತದೆ.
Sathya Sathish J G
ಮರೆಯಲಾಗದಷ್ಟು ಮನವ ತುಂಬಿದವಳೆ
ಪುರಾವೆಗಳೇ ಇಲ್ಲದೆ ಮರೆಯಾದೆ ಏಕೆ....?
#ಸತ್ಯಸತೀಶ್
Sathya Sathish J G
ಬರೆಯಲು ಬಂದೆ ನಾ ಕನವರಿಕೆಯ ನೀರವ ಪುಟಗಳಲ್ಲಿ
ಕರಗಿದವು ಪದಗಳು ಕಣ್ಣಂಚಿನ ಹನಿಗಳಿಂದಲೇ...😊
#ಸತ್ಯಸತೀಶ್
Sathya Sathish J G
ನನ್ನ ಬದುಕಲ್ಲಿ ನನ್ನೋಲವು ಮರಳಿ ಬರದಿದ್ದರೂ
ಮರಳಿ ಬಂದಿದೆ ಜುಲೈ 12...👩⚕️
ಪರಿಚಯದ ದಿನ..
ನಾ ಹುಟ್ಟಿದ ದಿನ ನನಗೆ ನೆನಪು ಇರಿತೋ ಇಲ್ಲವೋ ತಿಳಿದಿಲ್ಲ
ಆದರೆ ಈ ದಿನವ ನಾ ಮರೆಯಲಾರೆ.
ಇಂತಹ ಕೆಲವೊಂದು ನೆನಪುಗಳೊಂದಿಗೆ ಏಕಾಂಗಿಯಾಗಿರುವೇ
ನಿನ್ನನ್ನು ವರ್ಣಿಸಿ ಬರೆದ ಬರಹಗಳು ಎಷ್ಟೋ ನಾಕಾಣೆ...!
Sathya Sathish J G
ಕಡಲಾಳದಲ್ಲಿ ಅಡಗಿರುವ ಮುತ್ತು ನೀನು
ಸೇರಲೆತ್ನಿಸದೆ ನೋಡಿ ಮನತುಂಬಬೇಕು ಅಷ್ಟೇ..
ಯೋಗ್ಯತೆ ಮೀರಿದ ಜೊತೆಗಿರುವ ಕನಸ ಬಿಟ್ಟಿ
ದೂರದಲ್ಲೇ ನಿಂತು ಖುಷಿಪಡಬೇಕು ಅಷ್ಟೇ...🤗
ಬದುಕೆಂಬ ಈ ಜೀವನದ ಪುಸ್ತಕದಲ್ಲಿ...!
ಕೆಲವು ಪುಟಗಳು ಪ್ರೀತಿಯಲ್ಲಿ.
ಇನ್ನು ಕೆಲ ಪುಟಗಳು ನೋವಿನಲ್ಲಿ...🗿
Sathya Sathish J G
ನೋಡುವಾಸೆ ನನ್ನವರೆಲ್ಲ ನನ್ನನ್ನು ನೆನೆಯುವ ಬಗೆಯ
ತಂಗಾಳಿಯಲ್ಲಿ ತೇಲುತ ನಿಂತು....👻
ನಾವು ಬದುಕಿದ್ದಾಗ ಭಾವನೆಗಳಿಗೆ,
ಅಥವಾ ಯಶಸ್ಸಿಗೆ ಬೆಲೆ ಕೊಡದೆ ಇದ್ದವರೆಲ್ಲ
ಜೀವಂತ ಭಾವನೆಗಳ ಜೊತೆ ಸತ್ತಾಗ
ಮೂರಿಡಿ ಮಣ್ಣಕಿ ಹಿಂತಿರುಗಿಯು ನೋಡದೆ ಮರೆತು ನಡೆಯುವರು
ನಾ ಯಾರೆಂದು ತಿಳಿದವರು, ಅವರೆಲ್ಲ ನನ್ನವರೇ...🙏
Sathya Sathish J G
ಅತಿಯಾಗಿ ನಿದ್ದೆ ಮಾಡಿ ಸಾಧನೆಯನ್ನು ಮರೆತವರು ಎಷ್ಟೋ ಜನ.
ನಿದ್ದೆಯೇ ಬಾರದೆ ತುಸು ನಿದ್ದೆ ಮಾಡಿ ಆರೋಗ್ಯ ಕೆಡಿಸಿಕೊಂಡವರು ಇನ್ನೋಷ್ಟು ಜನ.
ಸರಿಯಾಗಿ ನಿದ್ದೆ ಮಾಡಲಿಲ್ಲ ಅಂದರೆ...!
ಮೆದುಳಿಗೆ ಮತ್ತು ಹೃದಯಕ್ಕೆ ಅಪಾಯ ಅಂತೆ.
ಇಲ್ಲದ ಸಲ್ಲದ ವಿಷಯಗಳೆಲ್ಲ ಮನಸ್ಸಿನ ಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಿ
ಬಡ್ಡಿ ಮಗಂದು ನಿದ್ದೆ ನನಗೆ ಬರೋದೇ ಇಲ್ಲ, ಈಗ ನಾ ಎನ್ ಮಾಡ್ಲಿ....,?
#ಸತ್ಯಸತೀಶ್
Sathya Sathish J G
ನಡುರಾತ್ರಿಯಲ್ಲಿ ನಿದ್ದೆ ಮರೆತು ಎದ್ದು ಕುಳಿತು
ನಗುವುದೋ ಅಳುವುದೋ ಒಂದು ತಿಳಿಯದಾಗಿದೆ..
ಮನಮೆಚ್ಚಿದ ಕಣ್ಣುಗಳಲ್ಲಿ ಎಂದು ಕಣ್ಣೀರು ಬಾರದಿರಲಿ
ಬೇಕಾದರೆ ನನ್ ಈ ಜೀವನದಲ್ಲಿ ಕಣ್ಣೀರು ಎಂದು ಬತ್ತದಿರಲಿ ದೇವ....!
#ಸತ್ಯಸತೀಶ್
Poke ಮಾಡಿದ ನೆಚ್ಚಿನ ಬರಹಗಾರರಿಗೆ ಧನ್ಯವಾದಗಳು...🙏